ಉತ್ತರ ಭಾರತದ ವಾಹನಗಳು, ಪ್ರೇಮಿಗಳೇ ಇವರ ಟಾರ್ಗೆಟ್ ಮೈಸೂರು: ಹೊರ ರಾಜ್ಯಗಳಿಂದ ಬರುವ ಟ್ರಕ್ಗಳು, ಪ್ರೇಮಿಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ತಡೆದು ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ರಾಜೀವ್ನಗರ ನಿವಾಸಿ ಅಬ್ದುಲ್ ರಹೀಂ(21) ಮತ್ತು ಗೌಸಿಯಾನಗರದ ತೌಸುಫ್ಬೇಗ್(23) ಬಂಧಿತರು. ರಾಜೀವ್ನಗರದ ರಿಂಗ್ ರಸ್ತೆಯಲ್ಲಿ ಈ ಇಬ್ಬರು ಕೈಯ್ಯಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ಕಾರು, ಬೈಕ್, ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ…