ಮೈಸೂರು: ರೋಟರಿ ಮೈಸೂರು ಉತ್ತರದ ವತಿಯಿಂದ `ರೋಟರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಮೂವರು ಕನ್ನಡ ಪರ ಹೋರಾಟ ಗಾರರಿಗೆ ನೀಡಿ, ಗೌರವಿಸಲಾಯಿತು. ಜೆಎಲ್ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಮೈಸೂರು ಉತ್ತರದ ವತಿ ಯಿಂದ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಪರ ಹೋರಾಟಗಾರರಾದ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಮೂಗೂರು ನಂಜುಂಡಸ್ವಾಮಿ, ಮೈಸೂರು ನಗರ ಸಾರಿಗೆ ಘಟಕದ ನಿರ್ವಾಹಕ ಕೆ.ಎಸ್. ತ್ಯಾಗ ರಾವ್ ಅವರಿಗೆ ಈ ಸಾಲಿನ `ರೋಟರಿ ಕನ್ನಡ ರಾಜ್ಯೋ…