ಭೇರ್ಯ: ಹಾರಂಗಿ ನಾಲಾ ಆಧುನೀಕರಣದಿಂದ ಈ ಭಾಗದ ರೈತರು ಒಂದು ಬೆಳೆ ಬೆಳೆಯಬಹುದು ಎಂದು ಮಿರ್ಲೆ ಜಿಪಂ ಸದಸ್ಯ ಸಾರಾ ನಂದೀಶ್ ತಿಳಿಸಿದರು. ಸಾಲಿಗ್ರಾಮದ ಕೆರೆ ಸಂಪೂರ್ಣ ವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜತೆಗೂಡಿ ಬಾಗಿನ ಅರ್ಪಿಸಿ ಮಾತನಾಡಿದರು. ಹಾರಂಗಿ ನಾಲೆ ಬೂದನೂರು ಹಳ್ಳ ಮತ್ತು ಶಿಡ್ಲಹಳ್ಳಿದವರೆಗೆ ಹರಿಯುತ್ತಿದ್ದು, ಮುಂದೆ ನೀರು ಹರಿಸಲು ನೀರಾವರಿ ಅಧಿಕಾರಿಗಳು ಶ್ರಮವಹಿಸಬೇಕಾಗಿತ್ತು. ಕೊನೆ ಹಂತವರೆಗೆ ನೀರು ಇದುವರೆವಿಗೂ ಹರಿದಿಲ್ಲ ಎಂದ ಅವರು ಈ ಬಾರಿ ವರುಣನ ಕೃಪೆಯಿಂದ ಎಲ್ಲೆಡೆ ಉತ್ತಮ ಮಳೆಯಾಗಿ…