ಚಾಮರಾಜನಗರ: ‘ರಾಷ್ಟ್ರಧ್ವಜ ಗೌರವಿಸುವುದು, ರಕ್ಷಣೆ ಮಾಡುವುದು ಭಾರತೀಯರ ಕರ್ತವ್ಯವಾಗಿದೆ’ ಎಂದು ಭಾರತ ಸೇವಾ ದಳದ ಸಂಪನ್ಮೂಲ ವ್ಯಕ್ತಿ ಶೇಷಾಚಲ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಭಾರತ ಸೇವಾದಳ ತಾಲೂಕು ಘಟಕ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕುರಿತ ಅರಿವು ಕಾರ್ಯ ಕ್ರಮದಲ್ಲಿ ಅವರು ರಾಷ್ಟ್ರಧ್ವಜ ಕುರಿತು ಮಾತನಾಡಿದರು. ಭಾರತ ಸೇವಾದಳ ನಾ.ಸು.ಹರ್ಡೀಕರ್ರವರ ಕನಸಿನ ಕೂಸು. ಗಾಂಧೀಜಿ ಅವರ ತತ್ವ, ಆದರ್ಶದಂತೆ ಸೇವೆಗಾಗಿ ಬಾಳು ಎಂಬ ವಾಕ್ಯದಡಿ ಕಾರ್ಯನಿರ್ವಹಿಸುತ್ತಿದೆ….