ಮೈಸೂರು: ಜಂಬೂ ಸವಾರಿಯ ವೇಳೆ ವಿಜಯದ ಸಂಕೇತವಾಗಿ ಕುಶಾಲುತೋಪು ಸಿಡಿಸುವ ಫಿರಂಗಿಗಳಿಗೆ ಬುಧವಾರ ಅರಮನೆಯ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೊಲೀಸ್ ಇಲಾಖೆ ವತಿಯಿಂದ ಪೂಜೆ ಸಲ್ಲಿಸಲಾಯಿತು. ಏಳು ಫಿರಂಗಿಗಳನ್ನು ಇಂದು ತಮ್ಮ ಸುಪರ್ದಿಗೆ ಪಡೆದ ಪೊಲೀಸರು, ಸಿಡಿಮದ್ದು ಸಿಡಿಸುವ ತಾಲೀಮಿಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ ಇಂದು ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ಇಂದು ಬೆಳಗ್ಗೆ 11 ಗಂಟೆಯಿಂದ 11.30ರೊಳಗೆ ಸಂದ ಅಭಿಜಿನ್ ಶುಭಲಗ್ನದಲ್ಲಿ ಫಿರಂಗಿಗಳಿಗೆ ಅರಿಶಿನ-ಕುಂಕುಮ ಇಟ್ಟು ಆರತಿ ಬೆಳಗಿ ವಿಜಯಗಣಪತಿ ಪೂಜೆ, ಮೃತ್ಯುಂಜಯ ಪೂಜೆ,…