ಮೈಸೂರು: ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಂಕರನಾಮ ಜಪಯಜ್ಞ ಸೇವಾ ಸಮಿತಿಯ ಶತಕೋಟಿ ಶ್ರೀ ಶಂಕರನಾಮ ಜಪ ಯಜ್ಞದ ಅಂಗವಾಗಿ ಅಗ್ರಹಾರದ ಶೃಂಗೇರಿ ಶಂಕರ ಮಠದಲ್ಲಿ ಶಂಕರನಾಮ ಜಪದ ಸಂಕಲ್ಪ ಅಭಿಯಾನಕ್ಕೆ ಆರ್ಎಸ್ಎಸ್ ಮುಖಂಡರಾದ ಸೀತಾರಾಮ ಕೇದಿಲಾಯ ಅವರು ಚಾಲನೆ ನೀಡಿದರು. ನಂತರ ಮಹರ್ಷಿ ಶಾಲೆಯ ಕಾರ್ಯ ದರ್ಶಿ ಭವಾನಿ ಶಂಕರ್ ಮಾತನಾಡಿ, ಮೈಸೂರಿನಲ್ಲಿ ಲಕ್ಷಾಂತರ ಮಂದಿಯಿಂದ ಯಶಸ್ವಿಯಾಗಿ ನೆರವೇರಿದ ಅತಿರುದ್ರ ಮಹಾಯಾಗ, ತೇರಾಕೋಟಿ ರಾಮಜಪ ಮತ್ತು ಶತಕೋಟಿ ಶಿವಪಂಚಾಕ್ಷರಿ ಯಾಗದ ನಂತರ ಶೃಂಗೇರಿ ಭಾರತಿ ತೀರ್ಥ…