ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಹೋದರನ ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದು ಅವರ ಪತ್ನಿ ಹಾಗೂ ಪುತ್ರಿಯನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮೈಸೂರಿನ ಶಾಂತಿನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಶಾಂತಿನಗರ 4ನೇ ಕ್ರಾಸ್ ನಿವಾಸಿ ಅಸ್ಲಂ ಪಾಷ(54) ಹತ್ಯೆಯಾದವರು. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪತ್ನಿ ದಿಲ್ಶಾನ್ ಬಾನು ಹಾಗೂ ಪುತ್ರಿ ನಫೀಜಾರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದಯಗಿರಿಯ ಶಾಂತಿನಗರ 6ನೇ ಕ್ರಾಸ್ ನಿವಾಸಿ ಸೈಯದ್ ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿ ಅಸ್ಲಂ ಪಾಷರನ್ನು ಹತ್ಯೆಗೈದು…