ಮೈಸೂರು: ಮೂರು ಅಂಗಡಿಗಳ ಬಾಗಿಲು ಮುರಿದು 1.85 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಮೈಸೂರಿನ ಶಿವರಾಂಪೇಟೆ ರಸ್ತೆಯ ಮನ್ನಾರ್ಸ್ ಮಾರ್ಕೆಟ್ ಎದುರು ಕಳೆದ ರಾತ್ರಿ ಸಂಭವಿಸಿದೆ. ಪ್ರಕಾಶ ಜೈನ್ ಎಂಬುವರ ಕಮಲ್ ಸೂಪರ್ ಬಜಾರ್, ಪ್ರತಾಪ್ ಚಂದ್ ಅವ ರಿಗೆ ಸೇರಿದ ಮಾರುತಿ ಟಾಯ್ಸ್ ಅಂಗಡಿ ಹಾಗೂ ಚಂದ್ರಶೇಖರ್ ಅವರ ವಂದನಾ ಎಂಟರ್ಪ್ರೈಸಸ್ಗಳಿಗೆ ಖದೀಮರು ಲಗ್ಗೆ ಹಾಕಿ ನಗದು ಕಳವು ಮಾಡಿದ್ದಾರೆ. ಹಿಂಬದಿಯ ಆಂಜನೇಯ ಸ್ವಾಮಿ ದೇವ ಸ್ಥಾನದ ಕಡೆಯಿಂದ ಬಂದು ಒಂದೇ ಕಟ್ಟಡ…