ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಮಾವೇಶದ ಅಂಗವಾಗಿ ಮೈಸೂರಲ್ಲಿ ಭಾನುವಾರ ನಡೆದ ಬೃಹತ್ ಶೋಭಾ ಯಾತ್ರೆ ಗಮನ ಸೆಳೆಯಿತು. ಓಂ ಚಿಹ್ನೆ ಇರುವ ಕೇಸರಿ ವರ್ಣದ ನೂರಾರು ಬಾವುಟಗಳು ಶೋಭಾ ಯಾತ್ರೆಯ ಉದ್ದಕ್ಕೂ ರಾರಾಜಿಸಿದವು. ಮೈಸೂರಿನ ಶಂಕರಮಠ ಆವರಣದಿಂದ ಹೊರಟ ಮೆರವಣಿಗೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಸಮ್ಮೇಳನಾಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವ ದಲ್ಲಿ ಅಲಂಕೃತ ಬೆಳ್ಳಿರಥದಲ್ಲಿ ಇರಿಸಿದ್ದ ಗಾಯತ್ರಿ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ ಅಲಂ ಕೃತ…