ರಾಮನಾಥಪುರ: ಇಲ್ಲಿನ ಸುಪ್ರಸಿದ್ಧ ಚರ್ತುಯುಗ ಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ ಶಿಥಿಲ ಗೊಳ್ಳುತ್ತಿದ್ದು ಮುಜರಾಯಿ ಇಲಾಖೆ ಸೇರಿದಂತೆ ಸಂಬಂಧಪಟ್ಟವರು ಜೀರ್ಣೋ ದ್ಧಾರಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಹೊಂದಿ ರುವ ಶ್ರೀ ಕ್ಷೇತ್ರ ಶತಮಾನಗಳಷ್ಟು ಹಳೆ ಯದಾದ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನವು ಜೀವನದಿ ಕಾವೇರಿ ದಡದಲ್ಲಿದ್ದು, ಸಾವಿರ ವರ್ಷದ ಇತಿಹಾಸ ಹೊಂದಿದೆ. ಸದ್ಯ ಈ ಪುರಾತನ ದೇವಸ್ಥಾನ ಶಿಥಿಲಾವಸ್ಥೆ ಹಂತ ತಲುಪುತ್ತಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಶ್ರೀರಾಮೇಶ್ವರಸ್ವಾಮಿ ದೇಗುಲದ ಗರ್ಭಗುಡಿ ಗೋಪುರ ಹಾಗೂ…