ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕಳವಳ ಬಿ.ಎಂ.ರಾಮಚಂದ್ರ ಅಭಿನಂದನಾ ಸಮಾರಂಭ ಮೈಸೂರು: ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿರವರ ಸ್ಮಾರ್ಟ್ಸಿಟಿಗಳು ಭಾರತವನ್ನು ಆಕ್ರಮಿಸಿಕೊಂಡು ಎಲ್ಲೆಡೆ ಹಿಂದಿಯೇ ಎಲ್ಲರ ಭಾಷೆಯಾಗುವ ಅಪಾಯವಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಕಳವಳ ವ್ಯಕ್ತಪಡಿಸಿದರು. ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಬಿ.ಎಂ.ರಾಮಚಂದ್ರ ಅಭಿನಂದನಾ ಬಳಗ ಶನಿವಾರ ಆಯೋಜಿಸಿದ್ದ ಅಭಿನಂದನೆ ಹಾಗೂ `ಬಣ್ಣದವಾಡಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏಕ ಭಾಷೆಯೆಂದರೆ ಹಿಟ್ಲರ್ ಭಾಷೆ, ಏಕದೈವ ಎಂದರೆ ಹಿಟ್ಲರ್ ದೈವ, ಏಕಮತ…