ಸುಂಟಿಕೊಪ್ಪ: ಅಪಘಾತಕ್ಕೆ ತುತ್ತಾಗಿ ರಸ್ತೆಗಡ್ಡಲಾಗಿ ಮಗುಚಿಕೊಂಡ ಲಾರಿಯಲ್ಲಿದ್ದವರ ನೆರವಿಗೆಂದು ಧಾವಿಸಿದ ಚಾಲಕ, ಬೇರೊಂದು ಲಾರಿಯ ಡಿಕ್ಕಿ ಯಿಂದ ದುರ್ಮರಣಕ್ಕೀಡಾದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ. ಮೂಲತಃ ಚೇರಂಬಾಣೆಯವರಾಗಿದ್ದು, ಕುಶಾಲನಗರದ ಸುಂದರನಗರದಲ್ಲಿ ನೆಲೆಸಿರುವ ರಾಜನ್ ಸಾವನ್ನಪ್ಪಿರುವ ದುರ್ದೈವಿ. ಸೋಮವಾರ ರಾತ್ರಿ 10.45ರ ಸುಮಾರಿಗೆ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಯತ್ತ ಸಾಗುತ್ತಿದ್ದ ಕಾಂಕ್ರಿಟ್ ತುಂಬಿದ್ದ ಲಾರಿ, ಚಾಲಕನ ಹತೋಟಿ ತಪ್ಪಿ ಗದ್ದೆಹಳ್ಳದ ಆರ್ಆರ್ ಕಾರ್ ಗ್ಯಾರೇಜ್ ಸಮೀಪದ ತಿರುವಿನಲ್ಲಿ ರಸ್ತೆಗಡ್ಡಲಾಗಿ ಮಗುಚಿಕೊಂಡಿತ್ತು. ಈ ಸಂದರ್ಭ ಅಪಘಾತ್ಕಕೀಡಾದ ಲಾರಿಯ ಮಾಲೀಕರಿಗೆ ಸೇರಿದ ಬೇರೊಂದು…