ದಯವಿಟ್ಟು ವಾಹನ ಚಾಲನೆ ವೇಳೆ ಮೊಬೈಲ್ ಬಳಸಬೇಡಿ… ನೀವು ಮಾಡುವ ತಪ್ಪಿಗೆ ಇತರರ ಬಲಿ ಪಡೆಯಬೇಡಿ… ಮೈಸೂರು: ಮೈಸೂರಿನ ಗಂಧದಗುಡಿ ಫೌಂಡೇಷನ್ ಕಾರ್ಯಕರ್ತರು ಮೊಬೈಲ್ನಲ್ಲಿ ಮಾತನಾಡುತ್ತಾ ಬೈಕ್, ಕಾರು ಇನ್ನಿತರ ವಾಹನ ಚಾಲನೆಯಿಂದ ಆಗುವ ಅನಾಹುತಗಳ ಕುರಿತು ಸೋಮವಾರ ಮೈಸೂರಿನ ಕೆ.ಆರ್.ವೃತ್ತದಲ್ಲಿ ಜನಜಾಗೃತಿ ಮೂಡಿಸಿದರು. ಗಂಧದಗುಡಿ ಫೌಂಡೇಷನ್ನ ಅಧ್ಯಕ್ಷ ಎನ್.ಎಲ್.ಮೋಹನ್ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೆ.ಅರ್.ವೃತ್ತದ ನಾಲ್ಕು ಕಡೆಗಳಲ್ಲಿ ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಿ ತಾವು ಅಪಘಾತಕ್ಕೀಡಾಗಿ ಪಾದಚಾರಿಗಳು ಮತ್ತು ಇನ್ನಿತರರಿಗೂ ವಾಹನ ಗುದ್ದಿಸಿ…