ಮೇಲುಕೋಟೆ: ದೇವಾಲ ಯದ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಫಲವಾಗಿ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 7.30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿದೆ. ಹಲವು ವರ್ಷಗಳಿಂದ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 9.30ರಿಂದ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿತ್ತು. ಆದರೆ ದೇವಾಲಯದ ಮುಂಭಾಗದ ಸೂಚನಾ ಫಲಕದಲ್ಲಿ ಮಾತ್ರ 7.30ಕ್ಕೆ ಆರಂಭ ಎಂದು ಹಾಕಲಾಗಿತ್ತು. ಇದರಿಂದ ಚೆಲುವ ನಾರಾಯಣ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ಬಹುಬೇಗ ಬಂದರೂ ದೇವರ ದರ್ಶನ ತಡವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಾದಿ ಗಳು ಹಾಗೂ ಸ್ಥಳೀಯ ನಾಗರಿಕರು…