ಮೈಸೂರು: ಬೃಹತ್ ಬ್ರಾಹ್ಮಣ ಸಮಾವೇಶದ ಯಶಸ್ಸಿಗೆ ಕಾರಣರಾದ ಶ್ರೀ ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಗೆ ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಇಂದು ದತ್ತ ಜಯಂತಿಯ ಪ್ರಯುಕ್ತ ನಡೆದ ಪೂಜಾ ಕೈಂಕರ್ಯದ ನಂತರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ನೂರಾರು ಬ್ರಾಹ್ಮಣ ಸಂಘದ ಸದಸ್ಯರು ಶ್ರೀಗಳಿಗೆ ವಂದನೆ ಸಲ್ಲಿಸಿ, ಸಮಾವೇಶದ ಯಶಸ್ಸಿಗೆ ಶ್ರೀಗಳು ಮತ್ತು ಆಶ್ರಮದ ಎಲ್ಲ ಸಿಬ್ಬಂದಿಯ ಸಹಕಾರವನ್ನು ಸ್ಮರಿಸಿಕೊಂಡರು. ನಂತರ ಸಂಘದ ಪದಾಧಿಕಾರಿ…