ಚಾಮರಾಜನಗರ: ನಗರದ ಶ್ರೀಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ರಥಬೀದಿಯಲ್ಲಿ ಶ್ರೀಕೃಷ್ಣ ವಿಶೇಷ ಪೂಜೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಶುಕ್ರವಾರ ನಡೆಯಿತು. 3 ಯುವತಿಯರ ತಂಡ ಹಾಗೂ 7 ಯುವ ಕರ ತಂಡ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಎರಡು ಕಂಬ ಗಳ ನಡುವೆ ಸುಮಾರು 15ರಿಂದ 20 ಅಡಿ ಎತ್ತರದಲ್ಲಿ ಕಟ್ಟ ಲಾಗಿದ್ದ ಮೊಸರು ತುಂಬಿದ್ದ ಮಡಿಕೆಯನ್ನು ಯುವಕ, ಯುವತಿಯರ ತಂಡ ಪಿರಮಿಡ್ ಆಕಾರ ರಚಿಸಿಕೊಂಡು ಒಡೆಯುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು. ಮೊಸರು ಮಡಿಕೆ…