ರಾಮನಾಥಪುರ: ಇಲ್ಲಿನ ಶ್ರೀ ರಾಮೇಶ್ವರಸ್ವಾಮಿ ದೇವಾಲಯ, ಯಾತ್ರಿ ನಿವಾಸಕ್ಕೆ ಶಾಸಕ ಡಾ.ಎ.ಟಿ. ರಾಮಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಅಗತ್ಯ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಕಾವೇರಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾ ಲಯಕ್ಕೆ ಮೊದಲು ಭೇಟಿ ನೀಡಿದ ಶಾಸಕರು, ದೇವಾಲಯದ ಗರ್ಭಗುಡಿ, ಶಿಥಿಲಗೊಂಡಿರುವ ದೇಗುಲದ ಪಾಶ್ರ್ವಗೋಡೆ ಗಳು. ದೇವಾಲಯದ ಪೌಳಿ, ಪ್ರಾಂಗಣವನ್ನು ಪರಿಶೀಲಿಸಿದರು. ಬಳಿಕ ಮಾತನಾಡಿ, ದೇಗುಲ ಆವರಣದ ಸುತ್ತಲೂ ಬಸವಲಿಂಗಗಳ ಗುಡಿಗಳು, ಶ್ರೀಚಕ್ರದ ಸ್ಥಳ, ಇಂದ್ರಾಕ್ಷಿ, ವಿಶಾಲಕ್ಷಮ್ಮ ಗುಡಿಗಳಲ್ಲಿ ಮಳೆ ಬಂದಾಗ ಸೋರುತ್ತಿದ್ದು, ಇದರ ಬಗ್ಗೆ…