ಮೈಸೂರು: ಶ್ರೀ ಶಂಕರ ನಾಮಜಪ ಯಜ್ಞ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಶತಕೋಟಿ ಶ್ರೀ ಶಂಕರ ನಾಮಜಪ ಯಜ್ಞದ ಉದ್ಘಾಟನಾ ಸಮಾರಂಭ ಸೆ.16ರಂದು ನಡೆಯಲಿದೆ ಎಂದು ಸಮಿತಿಯ ಸಂಯೋಜಕ ಪ್ರಸನ್ನ ಪ್ರಕಾಶ್ ತಿಳಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಹೊಸದುರ್ಗ ತಾಲೂಕು ಬೆಳಗೂರಿನ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿ ಸನ್ನಿಧಿಯ ಶ್ರೀ ಬಿಂದು ಮಾಧವ ಅವಧೂತ ಸ್ವಾಮೀಜಿ…