ನಂಜನಗೂಡು: ಕಳೆದ 11 ವರ್ಷಗಳ ಹಿಂದೆ ನಗರದ ಹಿರಿಯ ವಕೀಲ ಹಾಗೂ ಸಮಾಜದ ಚಿಂತಕ ಬಿ.ಮಹದೇವಪ್ಪರವರು ಹುಟ್ಟು ಹಾಕಿದ ಶ್ರೀವೀರಶೈವ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಲಾಭದಾಯಕವಾಗಿ ನಡೆಯುತ್ತಿದ್ದು, 2017-18ನೇ ಸಾಲಿನಲ್ಲಿ 6 ಲಕ್ಷ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ ಎಂದು ಸೊಸೈಟಿ ಅಧ್ಯಕ್ಷ ಎನ್.ಸಿ.ಬಸವಣ್ಣ ತಿಳಿಸಿದ್ದಾರೆ. ಅವರು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆದ 12ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದವರಿಗೂ ಹಾಗೂ ಕೆಳ…