ಮೈಸೂರು: ಮೈಸೂರಿನ ನಿವೃತ್ತ ಮುಖ್ಯ ಶಿಕ್ಷಕನೋರ್ವ ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮೈಸೂರಿನ ನಾಡನಹಳ್ಳಿ ಸರ್ದಾರ್ ವಲ್ಲಬಾಯ್ಪಟೇಲ್ ನಗರ ನಿವಾಸಿ ಪರಶಿವಮೂರ್ತಿ (61) ಆತ್ಮಹತ್ಯೆಗೆ ಶರಣಾದವರು. ಆಗಸ್ಟ್ 4ರಂದು ಕರ್ನೂಲ್ ಜಿಲ್ಲೆಯ ಶ್ರೀಶೈಲಂನ ಬಸ್ ನಿಲ್ದಾಣದ ಬಳಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಬಸ್ ಚಾಲಕ ಸಾಯಿ ಬಾಬಾ ಮಚ ರಿಯಾ ಎಂಬುವರು ಶ್ರೀಶೈಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ ಸ್ಥಳೀಯ ಪೊಲೀಸರು, ಮೃತದೇಹವನ್ನು…