ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮಾತನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಅವರ ಬಳಿ ತೆರಳಿ, ಹಠಾತ್ ಅವರನ್ನು ಆಲಂಗಿಸಿಕೊಂಡು, ಮತ್ತೆ ತಮ್ಮ ಆಸನದಲ್ಲಿ ಬಂದು ಕೂತು ಪ್ರಧಾನಿಯತ್ತ ದೃಷ್ಟಿ ಹರಿಸಿ, ಕಣ್ಣು ಹೊಡೆದರು. ರಾಹುಲ್ ಗಾಂಧಿಯವರ ಈ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದರು. `ಪ್ರಧಾನಿಯವರಿಗೆ ಒಂದು ಗೌರವ ವಿರುತ್ತದೆ. ಹಾಗಾಗಿ ಎಲ್ಲಾ ಸಂಸದರು ಸದನದ ನಿಯಮಗಳನ್ನು ಪಾಲಿಸಬೇಕು. ರಾಹುಲ್ ಗಾಂಧಿಯವರ ವರ್ತನೆ ಸದನಕ್ಕೆ…