ಮೈಸೂರು: ಮಾತಾ ಅಮೃತಾ ನಂದಮಯಿ ಮಠದ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಚ್ಛತಾ ಸೇವಾ ಅಭಿಯಾನ ಕಾರ್ಯ ಕ್ರಮವನ್ನು ರಾಮಕೃಷ್ಣ ಸ್ವಾಮೀಜಿಯವರ ನೇತೃತ್ವದಲ್ಲಿ ಕೆ.ಹೆಮ್ಮನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಮೃತ ಕೃಪಾ ಆಸ್ಪತ್ರೆಯ ವೈದ್ಯರು ಕೆ. ಹೆಮ್ಮರಗಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ನಡೆಸಲಾಯಿತು. ಅಲ್ಲದೆ, ಶಾಲಾ ಆವರಣ, ಪಶು ವೈದ್ಯಕೀಯ ಕೇಂದ್ರ ಹಾಗೂ ಊರಿನ ಪ್ರಮುಖ ಸ್ಥಳಗಳಲ್ಲಿ…