ಮೈಸೂರು: ಗುರುವಾರ ವಿಧಿವಶರಾದ ರಾಮಕೃಷ್ಣ ಮಿಷನ್ ಹಿರಿಯ ಸನ್ಯಾಸಿ ಹಾಗೂ ಪೊನ್ನಂಪೇಟೆ ಶ್ರೀ ರಾಮ ಕೃಷ್ಣ ಶಾರದಾಶ್ರಮದ ಹಿಂದಿನ ಅಧ್ಯಕ್ಷ ಸ್ವಾಮಿ ಜಗದಾತ್ಮಾನಂದಜೀ ಅವರ ಪಾರ್ಥಿವ ಶರೀ ರಕ್ಕೆ ಭಕ್ತ ಸಮುದಾಯ ಹಾಗೂ ಸನ್ಯಾಸಿ ಗಳು ಮೈಸೂರಿನ ಯಾದವಗಿರಿಯ ರಾಮ ಕೃಷ್ಣ ವಿದ್ಯಾಶಾಲಾ ಆವರಣದಲ್ಲಿರುವ ರಾಮ ಕೃಷ್ಣ ನೀತಿ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ (RIMSE) ಸಭಾಂಗಣದಲ್ಲಿ ನಮನ ಸಲ್ಲಿಸಿದರು. ಗುರುವಾರ ರಾತ್ರಿ 8 ಗಂಟೆ ವೇಳೆಗೆ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ರಿಮ್ಸೆಗೆ ತಂದು ಆಡಿಟೋರಿಯಂನಲ್ಲಿ ಇರಿಸ…