ಮೈಸೂರು: ರಾಜ್ಯ ಪುರಾತತ್ವ ಇಲಾಖೆಯು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಐತಿಹಾಸಿಕ ಹಾಗೂ ಪುರಾತನ ದೇವಾ ಲಯಗಳ ಸುತ್ತಮುತ್ತಲಿನ ಸ್ಥಳದಲ್ಲಿ ಭೂ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಕೇಂದ್ರ ಸರ್ಕಾರದ ಆರ್ಕಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಭೂ ಉತ್ಖನನ ಕಾರ್ಯ ನಡೆಸಿ ಅವಶೇಷಗಳ ಪತ್ತೆಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ನಿವೃತ್ತ ಪ್ರಾಧ್ಯಾಪಕರಾದ ಪುರಾ ತತ್ವ ಹಾಗೂ ಇತಿಹಾಸ ತಜ್ಞ ಪ್ರೊ.ಎಂ. ಎಸ್.ಕೃಷ್ಣಮೂರ್ತಿ ಅವರನ್ನು ಪ್ರಧಾನ ಇನ್ವೆಸ್ಟಿಗೇಟರ್ ಆಗಿ ನೇಮಿಸಿ ಶೋಧನಾ ಕಾರ್ಯವನ್ನು ಆರಂಭಿಸಲಾಗಿದೆ. ಈ…