ಪರಿಸರವಾದಿ ನಾಗೇಶ್ ಹೆಗಡೆ ಅಭಿಮತ ಮೈಸೂರಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ-80’ ಸ್ಮರಣೆ ಮೈಸೂರು: ಮಣ್ಣಿನ ಸೊಗಡು, ಸಸ್ಯ ಸಂಪತ್ತು, ನದಿ-ತೊರೆಗಳ ಬಗೆಗೆ ಪ್ರತಿಸ್ಪಂದನೆ ಮೂಲಕ ಅಭಿವ್ಯಕ್ತಿಗೊಳಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡದ ಸತ್ವವನ್ನು ಜಗತ್ತಿಗೆ ಸಾರಿದ `ಜನವಿಜ್ಞಾನಿ’ ಎಂದು ಚಿಂತಕ ಹಾಗೂ ಪರಿಸರವಾದಿ ನಾಗೇಶ್ ಹೆಗಡೆ ಸ್ಮರಿಸಿದರು. ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ, ಮೈಸೂರು ಫಿಲಂ ಸೊಸೈಟಿ, ನಿರಂತರ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘದ ಸಂಯುಕ್ತಾಶ್ರಯದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 80ನೇ ಜನ್ಮದಿನ…