ಮೈಸೂರು: ಟಿಬೆಟಿಯನ್ನರ 11ನೇ ಪಂಚೆನ್ ಲಾಮಾ ಕಾಣೆಯಾಗಿ 24 ವರ್ಷಗಳಾಗಿದ್ದು, ಅವರ ಹಾಗೂ ಇನ್ನಿತರ ಎಲ್ಲಾ ಕೈದಿಗಳ ಇರುವಿಕೆಯ ಬಗ್ಗೆ ಚೀನಾ ಬಹಿರಂಗಪಡಿಸಬೇಕು. ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದ ಪ್ರಾಂತೀಯ ಟಿಬೆಟಿಯನ್ ಯುವ ಕಾಂಗ್ರೆಸ್ ಮತ್ತು ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟನೆಯ ಸದಸ್ಯರು ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ಪಂಚೆನ್ ಲಾಮಾರ ಬಿಡುಗಡೆಗಾಗಿ ಪ್ರಾರ್ಥಿಸಿದರು. ಬಳಿಕ ಸಂಘ ಟನೆಗಳ…