ಮೈಸೂರು: ಪಾಲಿಕೆ ಅಧಿಕಾರಿಗಳ ಸೋಗಿನಲ್ಲಿ ಮನೆ ಅಳತೆ ಮಾಡುವ ನಾಟಕವಾಡಿ ಒಂಟಿ ಮಹಿಳೆ ಇದ್ದ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಮೂವರು ಖದೀಮರನ್ನು ತುಮಕೂರು ತಿಲಕ್ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆ ಮಾಡಿದಾಗ ಅವರು ಮೈಸೂರಿನ ಕುವೆಂಪು ನಗರ ‘ಎನ್’ ಬ್ಲಾಕ್ನಲ್ಲಿರುವ ಕೆ.ಜೆ.ಲೀಲಾವತಿ ಎಂಬುವರ ಮನೆಯಲ್ಲಿ ಕಾರ್ಪೊರೇಷನ್ ಅಧಿಕಾರಿಗಳೆಂದು ಹೇಳಿಕೊಂಡು ಮನೆ ಅಳತೆ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ದೋಚಿದ್ದ ವಿಚಾರ ಬಾಯ್ಬಿಟ್ಟಿದ್ದರು. ತುಮಕೂರು ಪೊಲೀಸರು ಆರೋಪಿಗಳ ಫೋಟೋ ತೆಗೆದುಕೊಂಡು ಬುಧವಾರ ಮೈಸೂರಿಗೆ ಬಂದು…