ರಾಮನಾಥಪುರ: ಕಳೆದ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಂಬಾಕು ಹೊಲಗಳು ಗದ್ದೆ ಯಂತಾಗಿದ್ದು, ಹೊಗೆ ಸಸಿ ನಾಟಿ ಮಾಡಿದ ರೈತರು ಆತಂಕಕ್ಕೊಳಗಾಗಿದ್ದಾರೆ. ಪೂರ್ವ ಮುಂಗಾರಿನಿಂದ ಉತ್ತಮ ಮಳೆ ಯಾದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದಲೂ ಉಳುಮೆ ಮಾಡಿ ತಂಬಾಕು ನಾಟಿ ಮಾಡಿ ದ್ದರು. ಅಲ್ಲದೆ ತಂಬಾಕು ಮಂಡಳಿ ಮತ್ತು ಅಂಗಡಿಗಳಿಂದ ಸಾವಿರಾರು ರೈತರು ಸಾಕಷ್ಟು ಬೆಲೆ ತೆತ್ತು ರಸಗೊಬ್ಬರವನ್ನು ಹಾಕಿ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಒಂದು ವಾರದಿಂದ ಬಿಳುತ್ತಿರುವ ಮಳೆಗೆ ಬೆಳೆ ಹಾಳಾಗುತ್ತಿದೆ. ಇದರಿಂದ ರೈತರು ಕೈ…