ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಸೇವನೆ ಸಂಪೂರ್ಣವಾಗಿ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆಜ್ಞೆ ಉಲ್ಲಂಘಿಸಿದಲ್ಲಿ ದಂಡ ತೆರಬೇಕಾಗುತ್ತದೆ. ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೋಗ್ಯ ರಕ್ಷಣೆ ಕಾ0iÉ್ದು ಪ್ರಕಾರ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್ಗಳಲ್ಲಿ, ದರ್ಶಿನಿ, ಪಬ್, ಕ್ಲಬ್ಗಳಲ್ಲಿ ಧೂಮಪಾನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರಾಭಿವೃದ್ಧಿ, ವಸತಿ ಸಚಿವ ಯು.ಟಿ.ಖಾದರ್, ಆದೇಶ ಇಂದಿನಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದರು. ಆದೇಶ ಪಾಲಿಸದ ಹೋಟೆಲ್, ಬಾರ್,…
ಮೈಸೂರು
ತಂಬಾಕು ಬ್ಯಾರನ್ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ
July 31, 2018ಪಿರಿಯಾಪಟ್ಟಣ: ತಂಬಾಕು ಸಂಸ್ಕರಣೆ ಮಾಡುವಾಗ ಬ್ಯಾರನ್ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ತಂಬಾಕು ಭಸ್ಮವಾಗಿದ್ದು, ರೈತನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ತಾಲೂಕಿನ ನಾಗನಹಳ್ಳಿ ಪಾಳ್ಯದ ರೈತ ವೆಂಕಟೇಶ ಬೋವಿ ಎಂಬುವರ ಬ್ಯಾರನ್ ನಲ್ಲಿ ತಂಬಾಕು ಹದ ಮಾಡುವ ಸಮಯದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಹದ ಮಾಡುತ್ತಿದ್ದ ತಂಬಾಕು ಮಾತ್ರ ವಲ್ಲದೆ ಈ ಹಿಂದೆ ಹದ ಮಾಡಿ ಸಂಗ್ರಹಿ ಸಿದ್ದ ಒಂದೂವರೆ ಲಕ್ಷ ರೂ.ಮೌಲ್ಯದ ತಂಬಾಕು, ಬ್ಯಾರನ್, ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ….