ಮೈಸೂರು: ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದ ಪುರಭವನದ ಆವರಣದಲ್ಲಿ ಪಾರ್ಕಿಂಗ್ ಗುತ್ತಿಗೆಯನ್ನು ಮೈಸೂರು ನಗರ ಪಾಲಿಕೆ ಶುಕ್ರವಾರ ರದ್ದು ಮಾಡಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆಯ ವತಿಯಿಂದಲೇ ಪಾರ್ಕಿಂಗ್ ವ್ಯವಸ್ಥೆ ಮುಂದುವರೆಸುವ ಆಲೋಚನೆ ಮಾಡುತ್ತಿದೆ. ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗು ವುದನ್ನು ತಡೆಗಟ್ಟಲು ಪುರಭವನದಲ್ಲಿ ನಗರ ಪಾಲಿಕೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆಯ ವ್ಯವಸ್ಥೆಯನ್ನು ನಿರ್ವಹಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆ ದಾರರು ಪಾಲಿಕೆ ನಿಗದಿಪಡಿಸಿದ್ದ ಶುಲ್ಕ ಕ್ಕಿಂತ ಹೆಚ್ಚುವರಿ…