ಇಂದು ನಡೆಯಲಿರುವ ರೈಲ್ವೆ ಮಂಡಳಿ ಸಭೆಯಲ್ಲಿ ನಿರ್ಧಾರ ಸಾಧ್ಯತೆ ಮೈಸೂರು, ಡಿ.3(ಆರ್ಕೆ)-ಕೋವಿಡ್-19 ನಿರ್ಬಂಧದಿಂದಾಗಿ ಸ್ಥಗಿತಗೊಂಡಿರುವ ರೈಲು ಸಂಚಾರ ಪುನರಾರಂಭಿಸಲು ಭಾರ ತೀಯ ರೈಲ್ವೆ ಮಂಡಳಿ ತಯಾರಿ ನಡೆಸುತ್ತಿದೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ತೀವ್ರತೆ ದಿನೇ ದಿನೆ ಕಡಿಮೆಯಾಗುತ್ತಿರುವುದರಿಂದ ಸಾವಿನ ಪ್ರಮಾಣವೂ ತಗ್ಗಿದ್ದು, ಕಳೆದ ಮಾರ್ಚ್ ಮಾಹೆಯಿಂದ ಸ್ಥಗಿತಗೊಂಡಿರುವ ಪ್ರಯಾಣಿಕರ ರೈಲು ಸಂಚಾರ ಪುನರಾರಂಭಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಭಾರತೀಯ ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್ಕುಮಾರ್ ನೇತೃತ್ವದಲ್ಲಿ ನಾಳೆ (ಡಿ.4) ದೆಹಲಿಯಲ್ಲಿ ಮಹತ್ವದ ಸಭೆ ನಿಗದಿಯಾಗಿದ್ದು, ದೇಶಾದ್ಯಂತ…