ಮೈಸೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡುವಂತೆ ರಾಷ್ಟ್ರೀಯ ಬಸವದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದನ್ನು ರಾಜ್ಯ ಆದಿಜಾಂಬವ ಸಂಘ ಖಂಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್, ಮಾದೇಶ್ವರರು ಶೈವ ಮೂಲದಿಂದ ಬಂದವರಾದರೂ ಲಿಂಗಧಾರಣೆ ಒಪ್ಪಿಕೊಂಡಿಲ್ಲ. ಇದಕ್ಕೆ ಬದಲಾಗಿ `ದೇವರಗುಡ್ಡ’ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಆದರೆ ಸು.ಮಲ್ಲಿಕಾರ್ಜುನಪ್ಪನವರು ಮಾದೇಶ್ವರರು ಲಿಂಗಾಯತ ಧರ್ಮ ಪ್ರಚಾರ ಪಡಿಸಿದರು ಎಂದು ಪ್ರತಿಪಾದಿಸಿ…