ನಂಜನಗೂಡು: ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಕಂಪನಿಯು (ಯುನೈಟೆಡ್ ಬ್ರೇವರೀಸ್ ಲಿಮಿಟೆಡ್) ಸಾಮಾಜಿಕ ಜವಾಬ್ದಾರಿಯಡಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿ ರುವುದರ ಬಗ್ಗೆ ಶಾಸಕ ಡಾ.ಯತೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಾಲೂಕಿನ ಬಂಚಳ್ಳಿಹುಂಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರ್ಕಾರ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದು ಜೊತೆಗೆ ಯುಬಿಯಂತಹ ಕಂಪನಿಗಳು ಸಾಮಾಜಿಕ ಕಳಕಳಿಯಿಂದ ಅನುಕೂಲ ಮಾಡಿ ಕೊಟ್ಟರೆ ಗ್ರಾಮಗಳಿಗೆ ಉತ್ತಮವಾದ ಕೆಲಸ ಮಾಡಬಹುದು ಎಂದರು. ಯುಬಿ ಕಂಪನಿಯವರು ಈ ಭಾಗದ 10…