ಆಲೂರು: ಯಾವುದೇ ಆಡಂಬರ, ಮದುವೆ ಮಂಟಪ ಹಾಗು ವಾದ್ಯಗೋಷ್ಠಿ ಇಲ್ಲದೇ ಸರಳವಾಗಿ ವಚನ ಮಾಂಗಲ್ಯದ ಮೂಲಕ ಜೋಡಿಯೊಂದು ಸತಿಪತಿಗಳಾದರು. ತಾಲೂಕಿನ ಆಲೂರು ಗ್ರಾಮದ ದಿ. ಎ.ಎಂ. ಚನ್ನಂಜಪ್ಪ ಮತ್ತು ಪುಟ್ಟತಾಯಮ್ಮ ಅವರ ಪುತ್ರಿ ಎ.ಸಿ. ಮಹೇಶ್ಕುಮಾರಿ ಹಾಗೂ ನಂಜನ ಗೂಡು ತಾಲೂಕು ಹೆಜ್ಜಿಗೆ ಗ್ರಾಮದ ದಿ.ಸುಬ್ರಹ್ಮಣ್ಯ ಮತ್ತು ಪ್ರೇಮ ದಂಪತಿ ಪುತ್ರ ಎಚ್.ಎಸ್.ಮಹದೇವಕುಮಾರ್ ಅವರು ಆಲೂರಿನ ಬಸವ ಭವನದಲ್ಲಿ ವಚನ ಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು. ನವದೆಹಲಿ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತದೇವರು ಬಸವಣ್ಣನವರ ವಚನ…