ಮೈಸೂರು: ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವನ್ನು ‘ವಿಶ್ವಮಾನವ ದಿನ’ ಎಂದು ಆಚರಿಸಲಾಯಿತು. ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯ ಪ್ರಸಾದ್, ಕುವೆಂಪು ಒಬ್ಬ ಸಾಮಾಜಿಕ ಜವಾ ಬ್ದಾರಿ ಇರುವ ಸಾಹಿತಿಯಾಗಿ, ವಿಶ್ವಮಾನವ ಕವಿಯಾಗಿ ಸಾಹಿತ್ಯ ಚರಿತ್ರೆಯಲ್ಲಿಯೇ ಅಚ್ಚಳಿ ಯದೇ ಉಳಿದವರಾಗಿದ್ದಾರೆ. ಅವರೊಬ್ಬ ಮೇರು ವ್ಯಕ್ತಿತ್ವದ ಜಗದ ಕವಿ ಹಾಗೂ ಯುಗದ ಕವಿ. ಅವರೊಬ್ಬ ಕ್ರಿಯಾಶೀಲ ವ್ಯಕ್ತಿಯಾ…