ಮೈಸೂರು: ಮೈಸೂರಿನ ವಿಜಯನಗರದ ಹಿನಕಲ್ ಸಮೀಪವಿರುವ ಮುಡಾ ರೈತ ಸಂತೆ ಕಟ್ಟಡದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಇಂದು ಆರಂಭವಾಯಿತು. ರೈತ ಸಂಘ ಹಾಗೂ ಎಪಿಎಂಸಿ ಆಶ್ರಯದಲ್ಲಿ ಆರಂಭವಾದ ಭಾನುವಾರದ ತರಕಾರಿ ಸಂತೆಯನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕ ಬಳಸದೆ ಬೆಳೆದ ಸೊಪ್ಪು, ತರಕಾರಿಗಳನ್ನು ತಂದು ನೇರವಾಗಿ ಈ ಸಂತೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾರಕ್ಕೊಮ್ಮೆ ಭಾನುವಾರ ಮಾತ್ರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆವರೆಗೆ ತರಕಾರಿ ಮಾರುಕಟ್ಟೆ ತೆರೆದಿರುತ್ತದೆ….