ಮೈಸೂರು: ಮೈಸೂರಿನ ಹಿರಿಯ ಕೈಗಾರಿಕೋದ್ಯಮಿ, ಕಾಮಾಕ್ಷಿ ಆಸ್ಪತ್ರೆಯ ಸಂಸ್ಥಾಪಕ ಟ್ರಸ್ಟಿ ಎಂ.ವಿನೋದ್ರಾವ್ (78) ಗುರುವಾರ ಸಂಜೆ ನಿಧನರಾದರು. 1970ರಲ್ಲಿ ಕಾಮಾಕ್ಷಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ದಿಂದ ಇಂದಿನವರೆಗೂ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಆಸ್ಪತ್ರೆಯ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಗಣೇಶ ಬೀಡಿ ಮಾಲೀಕರಾದ ಮಾಧವಶೆಣೈ ಅವರ ಪುತ್ರರಾಗಿ ಗಣೇಶ ಬೀಡಿ ಕಂಪನಿಯ ಅಭಿವೃದ್ಧಿಗೆ ಶ್ರಮಿಸಿದ್ದಲ್ಲದೆ, ಬೃಹಸ್ಪದಾಚಾರ್ಯ ಸ್ಕೂಲ್, ಶುಕ್ರ ಪ್ಯಾಕೇಜಿಂಗ್, ಮಾಧವ ಶೆಣೈ ಕಲ್ಯಾಣ ಮಂಟಪ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಿ, ಜನಸೇವೆಯ ಮೂಲಕ ಜನಪ್ರಿಯರಾಗಿದ್ದರು. ಮೃತರು ಪತ್ನಿ ಜಯಂತಿಬಾಯಿ,…