ಮೈಸೂರು: ಸ್ವಾತಂತ್ರ್ಯ ಬಂದ ನಂತರ ಮಹಿಳೆಯರ ಸಾಮಾಜಿಕ ಸ್ಥಿತಿ-ಗತಿಗಳು ಸಾಕಷ್ಟು ಸುಧಾರಿಸಿದೆ. ಆದರೆ, ಮಹಿಳಾ ಸಾಧಕರ ಕಾರ್ಯಕ್ರಮಗಳಿಗೆ ಮಹಿಳೆಯರೇ ಹೆಚ್ಚು ಭಾಗವಹಿಸುತ್ತಿಲ್ಲ ಎಂದು ಕಾದಂಬರಿಗಾರ್ತಿ ಮಂಗಳಾ ಸತ್ಯನ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದ ಸಹಯೋಗದೊಂದಿಗೆ `ಸಾಹಿತ್ಯ ಸಂಜೆ’ ಶೀರ್ಷಿಕೆಯಡಿ ಆಯೋಜಿಸಿದ್ದ `ಕಾದಂಬರಿಗಾರ್ತಿ ತ್ರಿವೇಣಿ ಬದುಕು-ಬರಹ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ತ್ರಿವೇಣಿ ಅವರ ಬದುಕು-ಬರಹದ ಬಗ್ಗೆ ವಿಚಾರ…