ಮೈಸೂರು: ಆನೆ ಲದ್ದಿಯಿಂದ ತಯಾರಾದ ಕಾಗದಕ್ಕೆ ಸಿಕ್ಕಿದೆ ಅಂಚೆ ಲಕೋಟೆ ಸ್ಪರ್ಶ! ಹೌದು, ಆನೆ ಸಂತತಿ ಸಂರಕ್ಷಣೆಯ ಸಂದೇಶ ಸಾರಲು ಆನೆಯ ಲದ್ದಿಯಲ್ಲಿರುವ ನಾರಿನಿಂದ ತಯಾರು ಮಾಡಿರುವ ಕಾಗದದಲ್ಲಿ ಅಂಚೆ ಲಕೋಟೆ ಹೊರತರಲಾಗಿದೆ. ಅರಣ್ಯ ಇಲಾಖೆ ಹಾಗೂ ಭಾರತೀಯ ಅಂಚೆ ಇಲಾಖೆ ಜಂಟಿ ಆಶ್ರಯದಲ್ಲಿ ವಿಶ್ವ ಆನೆ ದಿನದ ಅಂಗವಾಗಿ ಹೊರತಂದಿರುವ ಈ ವಿಶೇಷ ಅಂಚೆ ಲಕೋಟೆಯನ್ನು ಭಾನುವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಕೋಟೆಯನ್ನು ಸಿಎಂ…