ಬೆಂಗಳೂರು: ಚುನಾವಣಾ ಸ್ಪರ್ಧೆ ಬಯಸದ ಚಿತ್ರನಟ ಜಗ್ಗೇಶ್ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಯಶವಂತ ಪುರದಿಂದ ಕಣಕ್ಕಿಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಯತ್ನ ನಡೆಸಿದ್ದರು. ಇದಕ್ಕಾಗಿಯೇ ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸದೆ ಮೊದಲ ಮೂರು ಪಟ್ಟಿಯಲ್ಲೂ ಹಾಗೆಯೇ ಉಳಿಸಿ ಕೊಂಡಿದ್ದರು. ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರತುಪಡಿಸಿ, ಬೇರೆ ಸಂಸದರಿಗೆ ಅವಕಾಶವಿಲ್ಲ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದರೂ, ರಾಜ್ಯಾಧ್ಯಕ್ಷರಿಂದ ಪ್ರಯತ್ನ ಮುಂದುವರೆದಿತ್ತು. ವರಿಷ್ಠರು ಇಂದು…