ಮೈಸೂರು

ಮಡಿಕೇರಿ ತಾಲೂಕು ಎಪಿಎಂಸಿ ಅಧ್ಯಕ್ಷರಾಗಿ ಬೆಪ್ಪುರನ ಮೇದಪ್ಪ, ಉಪಾಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಆಯ್ಕೆ

June 7, 2020

ಮಡಿಕೇರಿ, ಜೂ.6- ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ರಾಗಿ ಬೆಪ್ಪುರನ ಮೇದಪ್ಪ ಹಾಗೂ ಉಪಾ ಧ್ಯಕ್ಷರಾಗಿ ವಾಂಚೀರ ಜಯನಂಜಪ್ಪ ಅವಿರೋಧವಾಗಿ ಆಯ್ಕೆಯಾದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಶನಿವಾರ ನಡೆದ ಚುನಾ ವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆರವನಾಡು ಗ್ರಾಮದ ಬೆಪ್ಪುರನ ಮೇದಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೊದ್ದೂರು ಗ್ರಾಮದ ವಾಂಚೀರ ಜಯನಂಜಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮ ಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಯನ್ನು ಚುನಾವಣಾಧಿಕಾರಿಯೂ ಆದ ಮಡಿಕೇರಿ ತಹಶೀಲ್ದಾರ್ ಮಹೇಶ್ ಘೋಷಿಸಿದರು.

ನೂತನ ಅಧ್ಯಕ್ಷರಾದ ಬೆಪ್ಪುರನ ಮೇದಪ್ಪ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮತ್ತಷ್ಟು ಅಭಿವೃದ್ಧಿಪಡಿ ಸಲು ಕಾರ್ಯಕ್ರಮ ರೂಪಿಸಲಾಗುವುದು. ಜೊತೆಗೆ ರೈತರ ಹಿತ ಕಾಪಾಡುವ ನಿಟ್ಟಿ ನಲ್ಲಿ ವ್ಯವಸ್ಥಿತ ಮಾರುಕಟ್ಟೆ ನಿರ್ಮಿಸ ಲಾಗುವುದು. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವ ಹಿಸಲಾಗುವುದು ಎಂದು ತಿಳಿಸಿದರು.

ಉಪಾಧ್ಯಕ್ಷರಾದ ವಾಂಚೀರ ಜಯ ನಂಜಪ್ಪ ಅವರು ಮಾತನಾಡಿದರು. ಈ ವೇಳೆ ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮುಖಂಡ ರಾದ ಗಿರೀಶ್ ಪೂಣಚ್ಚ, ಮೊಂಡಂಡ ಕುಟ್ಟಪ್ಪ, ಹೇಮಾ, ನಿರ್ಮಲಾ, ತಮ್ಮಯ್ಯ, ಚಂಡೀರ ಜಗದೀಶ್, ಎನ್.ಎ.ಕಾವೇರಪ್ಪ, ಚೆರಿಯಮನೆ ರೋಹಿಣಿ, ದೇವಪ್ಪ, ಅನಂತೇ ಶ್ವರ, ಅಂಬಿ ಕಾರ್ಯಪ್ಪ ಇತರರು ಇದ್ದರು.

Translate »