ಮೈಸೂರು

ಮಾಸ್ತಿ ವೆಂಕಟೇಶ್ ಅಯ್ಯಂಗಾರ್‍ರ 129ನೇ ಜಯಂತಿ ಆಚರಣೆ

June 7, 2020

ಮೈಸೂರು, ಜೂ. 6- ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರ ಉದ್ಯಾನವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 129ನೇ ಜಯಂತಿಯ ಅಂಗವಾಗಿ `ಕನ್ನಡದ ಆಸ್ತಿ ಸಾಹಿತಿ ಮಾಸ್ತಿ ‘ ಎಂಬ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವೈ.ಡಿ.ರಾಜಣ್ಣ ಪುಷ್ಪಾರ್ಚನೆ ಮಾಡಿ ಮಾತ ನಾಡಿ, ಕನ್ನಡದ ಸಣ್ಣ ಕಥೆಗಳ ಜನಕರೆಂದೇ ಖ್ಯಾತಿ ಹೊಂದಿದ್ದ ಮಾಸ್ತಿ ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡವನ್ನು ಹೃದಯ ಭಾಷೆಯಾಗಿ ಜೀವಂತ ವಿರಿಸಿಕೊಂಡವರು. ಮಾಸ್ತಿ ಕನ್ನಡದ ಆಸ್ತಿ ಎನಿಸಿಕೊಂಡಿದ್ದ ಕೇವಲ ಸಾಹಿತ್ಯ ಕೃಷಿಯಿಂ ದಲ್ಲ ಕನ್ನಡದ ಮನಸ್ಸುಗಳನ್ನು, ಲೇಖಕರನ್ನು, ಕವಿಗಳನ್ನು ಘೋಷಿಸಿ ಕನ್ನಡದ ಅಸ್ಮಿತೆಯನ್ನು ಎತ್ತರಕ್ಕೆ ಏರಿಸಿದ ಕಾರಣದಿಂದ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ರಾಜಸೇವಾ ಪುಸ್ತಕ ಎಂಬ ಬಿರುದಿಗೂ ಭಾಜನ ರಾಗಿದ್ದ ಮಾಸ್ತಿಯವರು ಸರ್ಕಾರದ ಕಾನೂನು ಕಟ್ಟಳೆಗಳು ಜನಸಾಮಾನ್ಯರಿಗೂ ಅರ್ಥವಾಗುವಂತಾಗಬೇಕು ಎಂದು ಪ್ರತಿಪಾದಿಸಿದರು. ಹಲವು ಇಂಗ್ಲಿಷ್ ಹಾಗೂ ಫ್ರಾನ್ಸ್ ಪ್ರಿನ್ಸ್ ಭಾಷೆಯ ನುಡಿಗಳನ್ನು ಕಂದಾಯ ಇಲಾಖೆಯಲ್ಲಿದ್ದಾಗ ಕನ್ನಡಕ್ಕೆ ಭಾಷಾಂತರ ಮಾಡಿಸಿ ಅನುಷ್ಠಾನಕ್ಕೆ ತಂದರು. ಆ ಮೂಲಕ ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಅಂದೇ ಶ್ರಮಿಸಿ ನಿಜವಾದ ಅರ್ಥದಲ್ಲಿ ಕನ್ನಡದ ಆಸ್ತಿಯಾದರು ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತ ನಾಡಿ, ಮಾಸ್ತಿಯವರ ಮಾತೃಭಾಷೆ ತಮಿಳು ಆದರೂ ಸಹ ಅವರ ಹೃದಯ ಭಾಷೆ ಕನ್ನಡವಾಗಿತ್ತು. ಅದಕ್ಕಾಗಿಯೇ ಅವರ ಸೇವೆ ಇವತ್ತಿಗೂ ಮಾದರಿಯಾಗಿದೆ. ಮೂಲತಃ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಅವರು ಕನ್ನಡ ಭಾಷೆಯನ್ನು ಪ್ರೀತಿಸುತ್ತಾ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯ ಪದ ಬಳಕೆಯನ್ನು ಕಡ್ಡಾಯವಾಗಿ ಮಾಡ ಬೇಕೆಂದು ಆಗ್ರಹಿಸಿದರು. ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸುಚೀಂದ್ರ, ಚಕ್ರಪಾಣಿ, ಶ್ರೀನಿವಾಸ್ ರಾಕೇಶ್, ಗಣೇಶ್ ಪ್ರಸಾದ್, ಜಯಸಿಂಹ ಶ್ರೀಧರ್, ಶ್ರೀಕಾಂತ್ ಕಶ್ಯಪ್ ಹಾಗೂ ಇನ್ನಿತರರು ಹಾಜರಿದ್ದರು.

Translate »