ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು. `ಬಾಗಿ’ ಚಿತ್ರದ `ಸಬ್ತೆರಾ…’, `ಎಂ.ಎಸ್.ಧೋನಿ ದಿ ಅನ್ಟೋಲ್ಡ್…