ಮೈಸೂರು ದಸರಾ

ಭಕ್ತ ಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ರಥೋತ್ಸವ
ಮೈಸೂರು, ಮೈಸೂರು ದಸರಾ

ಭಕ್ತ ಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ರಥೋತ್ಸವ

October 24, 2018

ಮೈಸೂರು: ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಇಂದು ಅಪಾರ ಭಕ್ತ ಸಮೂಹದ ನಡುವೆ ಭಕ್ತಿ-ಭಾವದಿಂದ ಅದ್ಧೂರಿಯಾಗಿ ನೆರವೇರಿತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಈ ಪ್ರಸಿದ್ಧ ಧಾರ್ಮಿಕ ಕೈಂಕರ್ಯ ವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ಯದುವಂಶಸ್ಥರಾದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ 8.10 ಗಂಟೆಗೆ ವೃಶ್ಚಿಕ ಶುಭ ಲಗ್ನದಲ್ಲಿ ವೈಭವದ ಚಾಮುಂಡೇಶ್ವರಿ ಮಹಾರಥೋತ್ಸವ (ರಥಾರೋಹಣ)ಕ್ಕೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ…

ಮೈಸೂರು ಅರಮನೆ ದಸರಾ ಸಂಪನ್ನ
ಮೈಸೂರು, ಮೈಸೂರು ದಸರಾ

ಮೈಸೂರು ಅರಮನೆ ದಸರಾ ಸಂಪನ್ನ

October 23, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ವಿಜಯಯಾತ್ರೆ ಹಾಗೂ ಶಮಿ ಪೂಜೆಯನ್ನು ಸೋಮವಾರ ವಿಧಿವಿಧಾನದಂತೆ ಅರಮನೆಯ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ಅ.18-19ರಂದು ಅರಮನೆ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ, ವಿಜಯ ಯಾತ್ರೆ ಹಾಗೂ ಶಮಿಪೂಜೆ ನೆರವೇರಿಸಬೇಕಾಗಿತ್ತು. ಆದರೆ ರಾಜಮನೆತನದ ಪ್ರಮುಖರಿಬ್ಬರ ಸಾವಿನ ಹಿನ್ನೆಲೆಯಲ್ಲಿ ರಾಜಪುರೋ ಹಿತರ ಸೂಚನೆಯ ಮೇರೆಗೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು 3…

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ಜಗ ಜಟ್ಟಿಗಳ ಕಾಳಗ

October 23, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು. ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ…

ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ
ಮೈಸೂರು, ಮೈಸೂರು ದಸರಾ

ನೇತ್ರರಾಜು ಚಿತ್ರಕ್ಕೆ ಭಾರೀ ಮೆಚ್ಚುಗೆ

October 23, 2018

ಮೈಸೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ಮಾವುತ ಕುಟುಂಬದ ತಾಯಿ-ಮಗ ಇಬ್ಬರು ಅರಮನೆಯ ದೀಪಾಲಂಕಾರವನ್ನು ಆಶ್ಚರ್ಯದಿಂದ ನೋಡುತ್ತಿರುವ ಅಪರೂಪದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಹಿರಿಯ ಛಾಯಾಗ್ರಾಹಕ ನೇತ್ರರಾಜು ತೆಗೆದಿರುವ ಈ ಅಪರೂಪದ ಚಿತ್ರಕ್ಕೆ ಫೇಸ್‍ಬುಕ್‍ನಲ್ಲಿ ಸಾವಿರಾರು ಜನರ ಮೆಚ್ಚುಗೆ ವ್ಯಕ್ತಪಡಿಸಿ, ಓಕೆ ಮಾಡಿದ್ದಾರೆ. ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಾವುತ ಕುಟುಂಬಸ್ಥರು ತಮಗಾಗಿ ನಿರ್ಮಿಸಿದ್ದ ಟೆಂಟ್‍ನಲ್ಲಿ ವಾಸವಾಗಿದ್ದರು. ತಾಯಿ-ಮಗ ದಸರಾ ಮಹೋತ್ಸವದ ಸಂದರ್ಭದಲ್ಲಿ ರಾತ್ರಿ ವೇಳೆಯ ಅರಮನೆ ದೀಪಾಲಂಕಾರ ದೃಶ್ಯವನ್ನು ಆಶ್ಚರ್ಯದಿಂದ…

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು
ಮೈಸೂರು, ಮೈಸೂರು ದಸರಾ

ಇಂದು ಸ್ವಸ್ಥಾನಗಳಿಗೆ ಮರಳಲಿರುವ ಜಂಬೂ ಸವಾರಿ ಯಶಸ್ಸಿನ ರೂವಾರಿಗಳು

October 21, 2018

ಮೈಸೂರು: ಅಪಾರ ಸಂಖ್ಯೆಯ ಜನಸಾಗರದ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿ ಯಾಗಿ ಹೆಜ್ಜೆ ಹಾಕಿದ್ದ ಅರ್ಜುನ ನೇತೃ ತ್ವದ ಗಜಪಡೆ ನಾಳೆ (ಭಾನುವಾರ) ಸ್ವಸ್ಥಾನಗಳಿಗೆ ಮರಳಲಿದೆ. ಜಂಬೂ ಸವಾರಿ ಮಾರನೇ ದಿನವಾದ ಶನಿವಾರ ಇಡೀ ದಿನ ರಿಲ್ಯಾಕ್ಸ್ ಮೂಡ್‍ನಲ್ಲಿತ್ತು. ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಸೆ.2ರಂದು ಹುಣಸೂರು ತಾಲೂ ಕಿನ ವೀರನಹೊಸಳ್ಳಿಯಿಂದ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ ಆರು ಆನೆ ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಬಂದು ಬೀಡು ಬಿಟ್ಟು, ಸೆ.5 ರಂದು ಅರಮನೆಯ ಆವರಣ ಪ್ರವೇಶಿ…

ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ
ಮೈಸೂರು, ಮೈಸೂರು ದಸರಾ

ಅರಮನೆಯಲ್ಲಿ ನಾಳೆ ವಿಜಯದಶಮಿ ಆಚರಣೆ

October 21, 2018

ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ(ವಿಜಯದಶಮಿ)ಯನ್ನು ಅ.22ರಂದು ಅರಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ರಾಜಮನೆತನದವರು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಪೂಜಾ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ…

ಕೆಆರ್‌ಎಸ್‌ಗೆ ಪ್ರವಾಸಿಗರ ಲಗ್ಗೆ
ಮೈಸೂರು, ಮೈಸೂರು ದಸರಾ

ಕೆಆರ್‌ಎಸ್‌ಗೆ ಪ್ರವಾಸಿಗರ ಲಗ್ಗೆ

October 21, 2018

ಮೈಸೂರು: ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯೊಂದಿಗೆ 10 ದಿನಗಳ ಮೈಸೂರು ದಸರಾ ಮಹೋತ್ಸವ ಶುಕ್ರವಾರವಷ್ಟೇ ಮುಕ್ತಾಯ ಗೊಂಡಿರುವುದರಿಂದ ಹೊರಗಿನಿಂದ ಬಂದಿರುವ ಪ್ರವಾಸಿಗರು ಕೆಆರ್‌ಎಸ್‌ನತ್ತ ಮುಖಮಾಡಿದ್ದಾರೆ. ದಸರೆ ವೀಕ್ಷಿಸಲೆಂದು ಮೈಸೂರಿಗೆ ಆಗಮಿಸಿರುವ ಪ್ರವಾಸಿ ಗರು ವೀಕೆಂಡ್ ಕಳೆಯಲು ಸುತ್ತಲಿನ ಪ್ರವಾಸಿ ತಾಣ ಗಳಿಗೆ ತೆರಳುತ್ತಿದ್ದಾರೆ. ಆಯುಧ ಪೂಜೆ ದಿನ (ಅ.18) ಕೆಆರ್‌ಎಸ್‌ಗೆ 19 ಸಾವಿರ ಮಂದಿ ಹಾಗೂ ವಿಜಯ ದಶಮಿ ದಿನ (ಅ.19) 22 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದರು. ಇಂದು (ಶನಿವಾರ) ಮತ್ತು ನಾಳೆ (ಭಾನುವಾರ) 30ರಿಂದ…

ಬಸ್, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ
ಮೈಸೂರು, ಮೈಸೂರು ದಸರಾ

ಬಸ್, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

October 21, 2018

ಮೈಸೂರು:  ಜಂಬೂ ಸವಾರಿಯ ಮಾರನೇ ದಿನವಾದ ಶನಿವಾರ ಮೈಸೂರು ನಗರದ ಹೃದಯಭಾಗ ದಲ್ಲಿ ಹೆಚ್ಚಿನ ಜನದಟ್ಟಣೆ ಹಾಗೂ ವಾಹನ ಸಂಚಾರ ಕಂಡುಬಂದಿತು. ಅ.10ರಂದು ದಸರಾ ಮಹೋತ್ಸವ ಉದ್ಘಾಟನೆಗೊಂಡ ಬಳಿಕ ವಿಜಯದಶಮಿ ಮೆರವಣಿಗೆ ದಿನವಾದ ಶುಕ್ರವಾರದವರೆಗೂ ಮೈಸೂರು ನಗರಕ್ಕೆ ಜನಸಾಗರವೇ ಹರಿದು ಬಂದಿತ್ತು. ಜಂಬೂಸವಾರಿ ಮೆರವಣಿಗೆ ಮುಗಿ ಯುತ್ತಿದ್ದಂತೆ ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ನೆಂಟರಿಷ್ಟರು, ಪ್ರವಾಸಿಗರು ಶನಿವಾರ ತಮ್ಮ ಊರುಗಳಿಗೆ ಮರಳು ತ್ತಿದ್ದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಹಾಗೂ ಸಬ್ ಅರ್ಬನ್ ಬಸ್ ನಿಲ್ದಾಣಗಳ ಸಂಪರ್ಕ ರಸ್ತೆಗಳಲ್ಲಿ ಸಂಚಾರ…

ಅರಮನೆ ಅಂಗಳದಲ್ಲಿ ಕಸದ ರಾಶಿ; ಸ್ವಚ್ಛತಾ ಸಿಬ್ಬಂದಿಯಿಂದ ತೆರವು ಕಾರ್ಯ
ಮೈಸೂರು, ಮೈಸೂರು ದಸರಾ

ಅರಮನೆ ಅಂಗಳದಲ್ಲಿ ಕಸದ ರಾಶಿ; ಸ್ವಚ್ಛತಾ ಸಿಬ್ಬಂದಿಯಿಂದ ತೆರವು ಕಾರ್ಯ

October 21, 2018

ಮೈಸೂರು: ವಿವಿಧ ಪಾಸ್ ಪಡೆದು ಅರಮನೆಯ ಆವರಣದಲ್ಲಿ ಜಂಬೂಸವಾರಿ ವೀಕ್ಷಿಸಲು ಬಂದಿದ್ದ ಸಾವಿ ರಾರು ವೀಕ್ಷಕರು ಎಸೆದು ಹೋಗಿದ್ದ ಪ್ಲಾಸ್ಟಿಕ್, ಪೇಪರ್, ನೀರಿನ ಬಾಟಲ್ ಸೇರಿದಂತೆ ಅಪಾರ ಪ್ರಮಾಣದ ಕಸದ ರಾಶಿಯನ್ನು ಶನಿವಾರ ಅರಮನೆಯ ಸ್ವಚ್ಛತಾ ಸಿಬ್ಬಂದಿಗಳು ಸಂಗ್ರಹಿಸಿ ವಿಲೇವಾರಿ ಮಾಡಿದರು. ಆ ಮೂಲಕ ಅರಮನೆಯ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ಮಾಡಲು ಶ್ರಮಿಸಿದರು. ಪಾಸ್ ಹಾಗೂ ಗೋಲ್ಡ್‍ಕಾರ್ಡ್ ಹೊಂದಿ ರುವವರಿಗಾಗಿ ಆರಮನೆ ಆವರಣದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರು ಜಂಬೂಸವಾರಿ ಮೆರವಣಿಗೆ ನೋಡಿದ ನಂತರ…

ಮೈಸೂರಲ್ಲಿ ವರ್ಷವಿಡೀ ದಸರಾ ರೀತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿಂತನೆ: ಸಿಎಂ
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ವರ್ಷವಿಡೀ ದಸರಾ ರೀತಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿಂತನೆ: ಸಿಎಂ

October 20, 2018

ಮೈಸೂರು:  ಮೈಸೂರಿನಲ್ಲಿ ವರ್ಷವಿಡೀ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ದಸರಾ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಲಲಿತ ಮಹಲ್ ಹೋಟೆಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು 10 ದಿನಕ್ಕೆ ಸೀಮಿತ ಮಾಡದೇ ವರ್ಷವಿಡೀ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಬೃಂದಾವನ, ಮೇಲುಕೋಟೆ, ಸೋಮನಾಥಪುರ, ಮೈಸೂ ರಿನ ಪಾರಂಪರಿಕ ಕಟ್ಟಡಗಳು, ಕೊಡಗು ಒಳಗೊಂಡಂತೆ ಟೂರಿಸ್ಟ್…

1 2 3 9
Translate »