ಮೈಸೂರು: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಂದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಿರುವ ಪೊಲೀಸರಿಗೆ ಬೇರೆ ಬೇರೆ ಕಡೆಯಲ್ಲಿ ಕಳವಾಗಿದ್ದ ಇನ್ನೂ ಹಲವು ಬೈಕುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕುಗಳನ್ನು ನಕಲಿ ಕೀ ಬಳಸಿ ಎಗರಿಸುವ ಚಾಲಾಕಿ ಖದೀಮರು ಗ್ರಾಮಾಂತರ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು…
ಮೈಸೂರು
ರಾತ್ರಿ 12 ಗಂಟೆ ನಂತರ ಓಡಾಡುವವರ ಫೋಟೋ ತೆಗೆದು ವಿಚಾರಣೆ
July 26, 2018ಮೈಸೂರು: ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರು ಎಚ್ಚರದಿಂದಿರಬೇಕು. ಏಕೆಂದರೆ ಮೈಸೂರು ಪೊಲೀಸರು ತಡೆದು ನಿಲ್ಲಿಸಿ ಫೋಟೋ ತೆಗೆದು, ವಿಚಾರಣೆ ಮಾಡುತ್ತಿದ್ದಾರೆ. ಅಪರಾಧಗಳನ್ನು ತಡೆಗಟ್ಟಲು ಮೈಸೂರು ನಗರದಾದ್ಯಂತ ಕಾನೂನು ಸುವ್ಯವಸ್ಥೆ(ಐ&ಔ) ಪೊಲೀಸರು ರಾತ್ರಿ ಗಸ್ತನ್ನು ಚುರುಕುಗೊಳಿಸಿದ್ದು, ಮಧ್ಯರಾತ್ರಿ 12 ಗಂಟೆ ನಂತರ ಓಡಾಡುವವರ ನಿಲ್ಲಿಸಿ, ಅವರ ಫೋಟೋ ತೆಗೆದು ವಿಚಾರಣೆ ಮಾಡಲಿದ್ದಾರೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ|| ವಿಕ್ರಂ ವಿ.ಅಮಟೆ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಹೆಸರು, ವಿಳಾಸ, ವೃತ್ತಿ, ಎಲ್ಲಿಂದ ಎಲ್ಲಿಗೆ…