ಮೈಸೂರು: ಐಎಂಎ ಸಂಸ್ಥೆಯ ಬಹು ಕೋಟಿ ವಂಚನೆಯಲ್ಲಿ ಮೈಸೂರಿಗರೂ ಸೇರಿದ್ದು, ವಂಚನೆಗೊಳಗಾದ ನೂರಾರು ಮಂದಿ ಗುರುವಾರ ಮೈಸೂರಿನ ಉದಯಗಿರಿಯಲ್ಲಿರುವ ಜಬ್ಬಾರ್ ಫಂಕ್ಷನ್ ಹಾಲ್ನಲ್ಲಿ ಪೊಲೀಸರಿಗೆ ತಮ್ಮ ದೂರು ಅರ್ಜಿಗಳನ್ನು ಸಲ್ಲಿಸಿದರು. ಐಎಂಎ ಸಂಸ್ಥೆಗೆ ಮೈಸೂರಿನಲ್ಲಿಯೂ ಸಾವಿ ರಾರು ಮಂದಿ ಲಕ್ಷಾಂತರ ಹಣ ಹೂಡಿದ್ದು, ಸಂಸ್ಥೆಯ ಇತ್ತೀಚಿನ ಬೆಳವಣಿಗೆಗಳಿಂದ ತೀರಾ ಕಂಗಾಲಾಗಿದ್ದಾರೆ. ಮೈಸೂರಿನವರಲ್ಲಿ 3 ಲಕ್ಷದಿಂದ 16 ಲಕ್ಷ ರೂ.ಗಳವರೆಗೂ ಕಳೆದುಕೊಂಡವರು ಸಾಕಷ್ಟಿದ್ದಾರೆ. ಬೆಂಗಳೂರಿಗೆ ಹೋಗಿ ದೂರು ಸಲ್ಲಿಸಲಾಗದವರಿಗಾಗಿ ಮೈಸೂರಿನಲ್ಲಿಯೇ ದೂರು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದ್ದು, ಉದಯ ಗಿರಿ…
ಮೈಸೂರು
ಐಎಂಎ ಸಂಸ್ಥೆಯಿಂದ ಮೈಸೂರಿನ ನೂರಾರು ಮಂದಿಗೆ ವಂಚನೆ
June 13, 2019ಮೈಸೂರು: ಐಎಂಎ ಸಂಸ್ಥೆಯ ವಂಚನೆಗೆ ಮೈಸೂರಿ ನವರೂ ಬಲಿಯಾಗಿದ್ದು, ವಂಚನೆಗೊಳ ಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬಹುದಾಗಿದೆ. ಐಎಂಎ ಸಂಸ್ಥೆಗೆ ಹಣ ಹೂಡಿಕೆ ಮಾಡಿ, ಕಳೆದುಕೊಂಡಿರುವ ಮೈಸೂರಿನ ನೂರಾರು ಮಂದಿ ಬೆಂಗಳೂರಿಗೆ ತೆರಳಿ ದೂರು ನೀಡುತ್ತಿರುವ ವಿಚಾರ ತಿಳಿದ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲ ಕೃಷ್ಣ, ವಂಚನೆಗೊಳಗಾದವರು ಅಗತ್ಯ ದಾಖಲೆಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಸ್ವೀಕೃತಿ ಪಡೆಯ ಬಹುದು. ನಗರದ ಎಲ್ಲಾ ಠಾಣೆಗಳಲ್ಲಿ ದಾಖಲಾದ ದೂರುಗಳನ್ನು ಕ್ರೂಢೀ ಕರಿಸಿ,…