ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ನಜರ್ಬಾದ್ನ ಕುಪ್ಪಣ್ಣ ಪಾರ್ಕ್ನಲ್ಲಿ ಅ.10ರಿಂದ 21ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ತರಾವರಿ ಅಲಂಕಾರಿಕ ಹೂವಿನ ಗಿಡಗಳ ಮಧ್ಯ ದಲ್ಲಿ ಹೂವಿನಿಂದಲೇ ತಯಾರಿಸುವ ದೆಹಲಿಯ ಲೋಟಸ್ ಟೆಂಪಲ್, ಅಶೋಕ ಸ್ತಂಭ, ಪೆಂಗ್ವಿನ್,ಫಿರಂಗಿ, ಅಮರ್ ಜವಾನ್ ಸ್ತಂಭ ಸೇರಿದಂತೆ ವಿವಿಧ 13 ಆಕೃತಿಗಳು ಪ್ರವಾಸಿಗರ ಮನ ಸೆಳೆಯಲು ಸಜ್ಜಾಗಿವೆ ಎಂದು ಮೈಸೂರು ಜಿಪಂ ಸಿಇಓ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷರಾದ ಕೆ.ಜ್ಯೋತಿ ತಿಳಿಸಿದರು. ನಜರ್ಬಾದಿನ ಕುಪ್ಪಣ್ಣ ಪಾರ್ಕ್ನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯ್ತಿ…