Tag: MC Nanaiah

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ
ಕೊಡಗು

ವಿವಿಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅಪಾಯಕಾರಿ ಮಾಜಿ ಸಚಿವ ಎಂ.ಸಿ. ನಾಣಯ್ಯ ವಿಷಾದ

October 30, 2018

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯ ಗಳನ್ನು ಕೂಡ ಜಾತಿ ಆಧಾರದಲ್ಲಿ ಪರಿಗಣಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಆವರಣದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹಕಾರದಿಂದ ನಿರ್ಮಾಣ ಗೊಂಡಿರುವ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾನಿಲಯ ಗಳನ್ನು ಜಾತಿ ಆಧಾರದಲ್ಲಿ ಪರಿಗಣಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಶಿಕ್ಷಣ ಸಂಸ್ಥೆಗಳು ಜಾತಿ ರಹಿತವಾಗಿ ಕಾರ್ಯ ನಿರ್ವಹಿಸುವ…

ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ
ಕೊಡಗು

ಬೆಟ್ಟ-ಗುಡ್ಡ ಅಗೆದು ರೆಸಾರ್ಟ್ ನಿರ್ಮಿಸಿದ್ದೇ ಕೊಡಗಿನ ದುರಂತಕ್ಕೆ ಕಾರಣ : ಮಾಜಿ ಸಚಿವ ಎಂ.ಸಿ. ನಾಣಯ್ಯ ಅಭಿಮತ

August 21, 2018

ಮಡಿಕೇರಿ:  ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿರುವುದು, ಬೆಟ್ಟ ಗುಡ್ಡಗಳನ್ನು ಅಗೆದು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿರುವುದು ಕೊಡಗಿನ ಈಗಿನ ದುರಂತಗಳಿಗೆ ಕಾರಣವೆಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ವೀರಯೋಧರನ್ನು ನೀಡಿರುವ ನಾಡಾದ ಕೊಡಗಿನಲ್ಲಿ ಮಹಾಮಳೆಯಿಂದ ಉಂಟಾಗಿರುವ ಅಪಾರ ಹಾನಿಯಿಂದಾಗಿ ಯೋಧರ ಸಹಕಾರ ದಿಂದಲೆ ರಕ್ಷಣಾ ಕಾರ್ಯಗಳಿಗೆ ಮೊರೆ ಹೋಗಿರುವುದು ವಿಷಾದಕರವೆಂದರು. ಕೊಡಗಿನ ಜನರು ಯಾವತ್ತೂ ಸರ್ಕಾರದಿಂದ ಭಿಕ್ಷೆ ಬೇಡಿದವರಲ್ಲ. ಕಾವೇರಿ ನದಿ ನೀರನ್ನು ಬಳಕೆ ಮಾಡುವ ಪ್ರದೇಶಗಳ…

Translate »