ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು, ಯಶಸ್ವಿ ಜಂಬೂ ಸವಾರಿ ರೂವಾರಿಗಳಾಗಿ, ನಂತರ ಅರ ಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆ ಗುರುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಪ್ರಯಾಣ ಬೆಳೆಸಿತು. ದಸರಾದಲ್ಲಿ ಪಾಲ್ಗೊಳ್ಳಲು ವಿವಿಧ ಶಿಬಿರಗಳಿಂದ ಎರಡು ತಂಡಗಳಲ್ಲಿ ಬಂದಿದ್ದ 13 ಆನೆಗಳಲ್ಲಿ ಮೂರು ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಜಯಪ್ರಕಾಶನನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಕಾಡಂಚಿನ ಗ್ರಾಮವಾದ ಚೌಡಳ್ಳಿ ಬಳಿ ಇಬ್ಬರನ್ನು ಬಲಿ ಪಡೆದ ಹುಲಿ ಸೆರೆ ಕಾರ್ಯಾ ಚರಣೆಗೆ ಬುಧವಾರವೇ…
ಮೈಸೂರು
ಅದ್ಧೂರಿ ಜಂಬೂಸವಾರಿ
October 9, 2019ಮೈಸೂರು, ಅ. 8(ಆರ್ಕೆ)- ನವರಾತ್ರಿ ಉತ್ಸವದ ಅಂತಿಮ ಘಟ್ಟವೂ ಆದ ವಿಶ್ವ ಪ್ರಸಿದ್ಧ ವಿಜಯದಶಮಿ ಮೆರವಣಿಗೆ ಇಂದು ವಿಜೃಂಭಣೆ ಹಾಗೂ ಯಶಸ್ವಿಯಾಗಿ ನೆರವೇರಿತು. ಮಳೆಯ ಚಿಂತೆ ಇಲ್ಲ, ಬಿಸಿಲು ಹೆಚ್ಚಿರದೇ ಹಿತಕರ ವಾತಾವರಣದಲ್ಲಿ ಜಗದ್ವಿಖ್ಯಾತ ದಸರಾ ಜಂಬೂ ಸವಾರಿ ಮೆರ ವಣಿಗೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನನ ರಾಜಗಾಂಭೀರ್ಯ ನಡಿಗೆಯಿಂದ ಸಾಗುತ್ತಿದ್ದರೆ ಪುಳಕಿತರಾದ ಜನಸ್ತೋಮ ಭಕ್ತಿಪರವಶರಾಗಿ ರಾಜಮಾರ್ಗ ದುದ್ದಕ್ಕೂ ಕೈಮುಗಿದು…