ಮೈಸೂರು, ಮಾ.16- ಮೈಸೂರು ಅರಮನೆ ಮಂಡಳಿ ವತಿಯಿಂದ ಕೋವಿಡ್-19 ಕಾಯಿಲೆಯ ಸ್ಫೋಟ ಮತ್ತು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಸ್ಥಳ ಗಳಲ್ಲಿ ಸಾಧ್ಯವಾಗುವ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೀಕ್ಷಣೆ, ಪ್ರತಿ ಭಾನುವಾರ ಮತ್ತು ರಜೆ ದಿನಗಳಲ್ಲಿ ವಿದ್ಯುತ್ ದೀಪಾಲಂ ಕಾರ ವೀಕ್ಷಣೆಯನ್ನು ಮಾ.22ರವರೆಗೆ ನಿರ್ಬಂಧಿಸಿದೆ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ
April 21, 2019ಮೈಸೂರು: ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಹೆಚ್ಚಿದ ತಾಪಮಾನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮ ಬಾಡಿ ಹೋಗಿದ್ದು, ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸದಾ ಗಿಜಿಗುಡುತ್ತಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಹೋಟೆಲ್ ಉದ್ಯಮ, ವಿವಿಧ ವ್ಯಾಪಾರೋದ್ಯಮ ಕುಗ್ಗಿದೆ. ಸಾಮಾನ್ಯ ವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೈಸೂರಿನತ್ತ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳ ಪರೀಕ್ಷೆ ನಡೆ ಯುವ ಹಿನ್ನೆಲೆಯಲ್ಲಿ ಮಾರ್ಚ್ ಎರಡನೇ ವಾರದಿಂದ ಪ್ರವಾಸಿಗರು ಸಾಂಸ್ಕøತಿಕ…
ಅರಮನೆ ನಗರಿ ಮೈಸೂರಲ್ಲಿ ಪ್ರವಾಸಿಗರಿಗೆ ಮತ್ತೊಂದು ಹೊಸ ಆಕರ್ಷಣೆ `ಸ್ನೋ-ಸಿಟಿ’
April 15, 2019ಮೈಸೂರು: ಮಂಜಿನ ಲೋಕದಲ್ಲಿ ಕ್ಷಣವಾದರೂ ಕಾಲ ಕಳೆಯ ಬೇಕೆಂಬ ಮನದಾಸೆಯುಳ್ಳ ಮೈಸೂರಿ ಗರು ಹಿಮಾಲಯಕ್ಕೆ ಹೋಗಬೇಕಾಗಿಲ್ಲ. ಕೊರೆವ ಚಳಿ ಅನುಭವದೊಂದಿಗೆ ಹಿಮಾ ವೃತಗೊಂಡ ಪ್ರದೇಶದಲ್ಲಿ ಆಟ ಆಡಿ, ರೋಮಾಂಚನಗೊಳ್ಳುವ ವಾತಾವರಣ ವನ್ನು ಮೈಸೂರಿನಲ್ಲಿ ಕಲ್ಪಿಸಲಾಗಿದ್ದು, ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ವಾಗಿ ರೂಪುಗೊಳ್ಳಲಿದೆ. ಸಾಂಸ್ಕøತಿಕ ನಗರಿ ಮೈಸೂರಿನ ಲೋಕ ರಂಜನ್ ಮಹಲ್ ರಸ್ತೆಯಲ್ಲಿರುವ ರಿಜೆನ್ಸಿ ಚಿತ್ರಮಂದಿರ ಕಟ್ಟಡದಲ್ಲಿಯೇ ಸ್ಟಾರ್ವೆಲ್ಟ್ ಎಂಟರ್ಟೈನ್ಮೆಂಟ್ ಎಲ್ಎಲ್ಪಿ ಸಂಸ್ಥೆ ಮಂಜಿನ ಲೋಕ (ಸ್ನೋ-ಸಿಟಿ)ವನ್ನು ನಿರ್ಮಿಸಿದೆ. ಮೈಸೂರು ನಗರದ ಮೊಟ್ಟ ಮೊದಲ `ಸ್ನೋ-ಸಿಟಿ’ಯನ್ನು ಭಾನುವಾರ…